30 Jan 2026

ಫ್ಲೈಓವರ್ ಕಾಮಗಾರಿಗೆ ರಸ್ತೆ ಬಂದ್ ಅಗತ್ಯ

By


ಹುಬ್ಬಳ್ಳಿಯ ಕಿತ್ತೂರು ಚನ್ನಮ್ಮ ವೃತ್ತದ ಬಳಿ ನಡೆಯುತ್ತಿರುವ ಬಹುನಿರೀಕ್ಷಿತ 3.61 ಕಿ.ಮೀ. ಎಲಿವೇಟೆಡ್ ಫ್ಲೈಓವರ್ ಕಾಮಗಾರಿಯಿಂದ ಎಲ್ಲಿ ನೋಡಿದರೂ ಧೂಳ್ ಆವರಿಸಿದೆ‌. ಸುಮಾರು ₹349.49 ಕೋಟಿ ವೆಚ್ಚದ ಈ ಯೋಜನೆ ಇದ್ದಾಗಿದೆ. ಫ್ಲೈಓವರ್ ಕಾಮಗಾರಿಯಿಂದ ಎಷ್ಟು ನೀರುu ನೆಲಕ್ಕೆ ಸುರಿದರೂ ಕೆಲವೇ ಗಂಟೆಗಳಲ್ಲಿ ಮತ್ತೆ ಒಣಗಿ, ಧೂಳ್ ಆವರಿಸಲು ಆರಂಭವಾಗುತ್ತದೆ. ಹಾಗಾಗಿ ಪರಿಹಾರ ಏನೆಂದರೆ, ಕಾಮಗಾರಿ ನಡೆಯುತ್ತಿರುವ ಎಲ್ಲ ರಸ್ತೆಗಳು ಬಂದ್ ಮಾಡಿ, ಎಲ್ಲ ವಾಹನ ಸಂಚಾರ ನಿರ್ಬಂಧಿಸುವುದು. ಇದು ತಾತ್ಕಾಲಿಕ ಕಾಮಗಾರಿ ಮುಗಿಯುವವರೆ ಅಷ್ಟೇ. ಅದು ಬಿಟ್ಟರೆ ಬೇರೆ ಯಾವ ಮಾರ್ಗವೂ ಇಲ್ಲ. ಧೂಳ್ ಮುಕ್ತ ಮಾಡಲು ಸಾಧ್ಯವಿಲ್ಲ.

ಅದರ ಬದಲಾಗಿ ಕಾಮಗಾರಿ ನಡೆಯುತ್ತಿರುವ ಎಲ್ಲ ರಸ್ತೆಗಳನ್ನು ಬಂದ್ ಮಾಡಿ, ಬಸ್ ಸೇರಿದಂತೆ ಎಲ್ಲ ವಾಹನಗಳಿಗೆ ಪರ್ಯಾಯ ಮಾರ್ಗ ನೀಡಬೇಕು. ದಿನನಿತ್ಯವೂ ಧೂಳ್ ಸುದ್ದಿ ನೋಡುವ ಬದಲು ಕಾಮಗಾರಿ ಬೇಗ ಮುಗಿಯಲು ಆ ಕಾಮಗಾರಿ ರಸ್ತೆಯ ವಾಹನ ಸಂಚಾರ ನಿರ್ಬಂಧಿಸುವುದು ಉತ್ತಮ. ಹೂ ಬಳ್ಳಿ ಅತ್ಯುತ್ತಮವಾಗಿ ಕಾಣಲು ಕೆಲವು ತಿಂಗಳು ಬೇಕು. ಅದಕ್ಕೆ ಸಾರ್ವಜನಿಕ ಸಹಕಾರ ಅತ್ಯಗತ್ಯ. ಕಾಮಗಾರಿಗಳು ನಡೆಯುವ ಎಲ್ಲಾ ರಸ್ತೆ ಬಂದ್ ಮಾಡಬೇಕು. ಪರ್ಯಾಯ ಮಾರ್ಗ ನೀಡಬೇಕು. ಧೂಳ್ ಮುಕ್ತ ಮಾಡಲು ಇದೊಂದೇ ದಾರಿ. ಕಾಮಗಾರಿ ವೇಗವಾಗಿ ಮುಗಿಯಲು ರಹದಾರಿ.
IPL Free Ticket Offer