ಎಸ್.ಐ.ಟಿ ರಚನೆಗೆ ಜನ ಬೆಂಬಲ! ಸರ್ಕಾರ ಕೈಗೊಂಡ ತ್ವರಿತ ಕ್ರಮ



*ರ್ಮ*ಳ ಕರ್ನಾಟಕದಲ್ಲಿದೆಯೋ ಅಥವಾ ಅರಬ್ಬಿ ಸಮುದ್ರದಲ್ಲಿದೆಯೋ ಎಂಬುದು ಗೊತ್ತಾಗುತ್ತಿಲ್ಲ. ಶ್ರೀ ಮಂಜುನಾಥ್ ಸ್ವಾಮಿಯ ಸುಕ್ಷೇತ್ರ *ರ್ಮ*ಳ ಎಂದರೆ ಅದರಲ್ಲಿ ಎರಡು ಮಾತಿಲ್ಲ. ಸಾವಿರಾರೂ, ಲಕ್ಷಾಂತರ ಭಕ್ತರು ಭೇಟಿ ನೀಡಿ ದರ್ಶನ ಪಡೆಯುತ್ತಾರೆ. ಅದರಲ್ಲಿ ಯಾರ ಅಭ್ಯಂತರವಿಲ್ಲ. ಕರ್ನಾಟಕ ರಾಜ್ಯಾದ್ಯಂತ ಜನ ಪ್ರಶ್ನೆ ಮಾಡುವುದು ಏನೆಂದರೆ ಶ್ರೀ ಮಂಜುನಾಥ್ ಸ್ವಾಮಿಯ ದೇವಾಲಯದ ಸುತ್ತಲೂ 100-200 ಮೀಟರ್ ಹೊರತುಪಡಿಸಿ, ದಕ್ಷೀಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ *ರ್ಮ*ಳ ಕಂದಾಯ ಗ್ರಾಮ, *ರ್ಮ*ಳ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದ ಅತ್ಯಾ*ರ, ಸರಣಿ ಕೊ* ಪ್ರಕರಣಗಳಿಗೆ ಸಂಬಂಧಿಸಿದಂತೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎನ್ನುವುದು ಆಗ್ರಹವಾಗಿದೆ. ಈ ಅಗ್ರಹ ಬೀದರ್ ಜಿಲ್ಲೆಯಿಂದ ಚಾಮರಾಜನಗರ ಜಿಲ್ಲೆಯವರೆಗೆ ಕೇಳಿ ಬರುತ್ತಿದೆ.

ಕಾಯ್ದೆ, ಕಾನೂನು ಇರುವುದು ಯಾವ ಕಾರಣಕೋಸ್ಕರ ಜನರು ನೆಮ್ಮದಿಯಿಂದ ನಿಟ್ಟುಸಿರು ಬಿಡುವಂತಾಗಲಿ ಎನ್ನಕೋಸ್ಕರ, ದಿನಕ್ಕೊಂದು ಹೊಸ ಪ್ರಕರಣಗಳು ಬೆಳಕಿಗೆ ಬರುತ್ತಾ ಹೋದಂತೆ ಜನರು ದಂಗೆ ಏಳುವ ಕಾಲ ದೂರವಿಲ್ಲ. ಜನರ ಬೇಡಿಕೆಯಂತೆ ಎಸ್.ಐ.ಟಿ ರಚಿಸಿ, ಸೂಕ್ತ ತನಿಖೆ ನಡೆಸುವ ಮೂಲಕ ಆರೋಪಿಗಳಿಗೆ ಶಿಕ್ಷೆ ವಿಧಿಸುವಂತಹ ಕೆಲಸ ಕ್ಷಿಪ್ರ ಮಾರ್ಗದಲ್ಲಿ ಸಾಗಬೇಕು. ರಾಜ್ಯ ಸರ್ಕಾರ ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಬೇಕು. ಜನರಿಗೆ ಬೇಕಾಗಿರುವುದು ಸತ್ಯದ ಜೊತೆಗೆ ನೆಮ್ಮದಿ ಬದುಕು. ಸರ್ಕಾರಗಳು ಇರೋದು ಯಾವ ಕಾರಣಕೊಸ್ಕರ ಜನರ ಆಸೆ, ಆಶೋತ್ತರಗಳನ್ನು ಈಡೇರಿಸಲು ಸಲುವಾಗಿ, ಜನರ ಬೇಡಿಕೆಯಂತೆ ಎಸ್.ಐ.ಟಿ ರಚಿಸಿ, ಸೂಕ್ತ ತನಿಖೆ ನಡೆಸುವುದು ಅವಶ್ಯಕವಾಗಿದೆ.
Related High CPC Keywords